ಮದುವೆ ಆದ ಎರಡೇ ದಿನಕ್ಕೆ ಸೊಸೆ ಸೋನಾಲ್ ಮಾಡಿದ ಕೆಲಸಕ್ಕೆ ಕಣ್ಣೀರು ಸುರಿಸಿದ ಅತ್ತೆ ಮಾಲತಿ ಸುಧೀರ್

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ತಾರಾ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಜೊತೆ ನಟಿ ಸೋನಾಲ್ ಮೊಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಅರಮನೆಯಲ್ಲಿ ಗುರು ಹಿರಿಯರು, ಸ್ನೇಹಿತರು, ಬಂಧುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು.

 

 

ಮಗನ ಮದುವೆಯ ಸಂಭ್ರಮದಲ್ಲಿರುವ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ತಮ್ಮ ಬಹುದಿನದ ಕನಸು ನನಸಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮಗ ತುಂಬಾ ಒಳ್ಳೆಯವನು, ಸುಂದರ. ಅವರು ತುಂಬಾ ಸೃಜನಶೀಲರು. ಅವನಿಗೆ ಸರಿಯಾದ ಕಂಕಣ ಬಲ ಏಕೆ ಸಿಗಲಿಲ್ಲ? ಯಾರೂ ಅವನನ್ನು ಏಕೆ ಇಷ್ಟಪಡುವುದಿಲ್ಲ? ಮದುವೆ ಬಂಧನಕ್ಕೆ ಯಾಕೆ ಹೋಗುತ್ತಿಲ್ಲ ಎಂಬ ನೋವು ಇತ್ತು. ಇದು ಹೀಗೇ ಉಳಿಯುತ್ತದೆ ಎಂದು ನನಗೆ ಭಯವಾಯಿತು. ಆದರೆ ಈಗ ಅವರು ಮದುವೆಯಾಗುತ್ತಿದ್ದಾರೆ. ಇದು ತುಂಬಾ ಚೆನ್ನಾಗಿದೆ. ತುಂಬಾ ಹೆಮ್ಮೆ ಎಂದರು.

ನಾನು ರಾಯರ ಭಕ್ತ. ಅಂದಹಾಗೆ ಜಿಮ್ಮಿ ಗುರುವಾರ ರಾತ್ರಿ ಒಂಬತ್ತು ಗಂಟೆಗೆ ಬಂದು ಲ್ಯಾಪ್‌ಟಾಪ್ ಇತ್ತು ಅಮ್ಮ, ಈ ಹುಡುಗಿ ಹೇಗಿದ್ದಾಳೆ. ತರುಣ್ ಮದುವೆಯಾಗುತ್ತಾರೆ ಎಂದು ಹೇಳಿದ್ದಾರೆ. ಹಾ. ಅಂತಾ ನನಗೆ ಶಾಕ್‌ ಆಯಿತು. ಮದುವೆ ಆಗಬೇಕು ಎಂದು ಬಿಗ್ ಬಾಸ್ ಹೇಳಿದರು. ನಾವು ಈ ಹುಡುಗಿಯನ್ನು ಸರಿ ಮಾಡಿದ್ದೇವೆ. ಬಿಗ್ ಬಾಸ್ ಹೇಳಿದಾಗ ನಾನು ಓಕೆ ಅಂದೆ ಎಂದು ಮಾಲತಿ ಸುಧೀರ್ ಹೇಳಿದ್ದಾರೆ.

 

ಪತಿ ಸುಧೀರ್ ಅವರನ್ನು ನೆನಪಿಸಿಕೊಂಡ ಮಾಲತಿ ಸುಧೀರ್, ಅವರ ನೆನಪು ತುಂಬಾ ಕಾಡುತ್ತದೆ.. ಯಜಮಾನನಿಲ್ಲದೇ ಬದುಕುವುದೇ ಕಷ್ಟದ ಬದುಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡ ನೋವು ನಮ್ಮನ್ನು ಕಾಡುತ್ತಿದೆ. ನಾನು ಮೊದಲೇ ಹೇಳಿದ್ದೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು. ಸುಧೀರನ ಫೋಟೋವನ್ನು ಮದುವೆ ಮನೆಯಲ್ಲಿ ಎಲ್ಲಾದರೂ ಹಾಕಬೇಕು ಎಂದಿದ್ದೆ. ಹೀಗಾಗಿ ಮದುವೆಗೆ ಬಂದವರೆಲ್ಲ ನೋಡುವಂತೆ ಅವರ ಫೋಟೋ ಹಾಕಿದ್ದಾರೆ. ನಾನೇ ಕೆಲವು ಫೋಟೋಗಳನ್ನು ಕಳುಹಿಸಿದ್ದೆ, ಆದರೆ ಅವರು ಏನು ಪೋಸ್ಟ್ ಮಾಡಿದ್ದಾರೆ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದರು.

ಮದುವೆ ಆದ ಎರಡೇ ದಿನಕ್ಕೆ ಸೊಸೆ ಸೋನಲ್ ಮನೆಗೆ ಬಂದು ಮಾಡಿದ ಕೆಲಸಕ್ಕೆ ತಾಯಿ ಕಣ್ಣೀರು ಹಾಕಿದ್ದಾರೆ. ಸೊಸೆ ಸೋನಲ್ ಮೊಂಥೆರೋ ಕ್ರಿಶ್ಚಿಯನ್ ಹುಡುಗಿ ಆದರು ಹಿಂದೂ ಸಂಪ್ರಾಯದಂತೆ ಮದುವೆ ಆಗಿದ್ದಾರೆ. ಮನೆಗೆ ಬಂದ ಬಳಿಕ ಮೊದಲು ಮಾವ ಸುಧೀರ್ ಫೋಟೋ ಬಳಿ ಹೋಗಿ ನಮಸ್ಕಾರ ಮಾಡಿ ಆಶೀರ್ವಾದ ಪಡೆದಿದ್ದಾರೆ.

 

 

ಸೋನಲ್ ಅವರ ಈ ಪ್ರೀತಿ ಕಂಡು ಅತ್ತೆ ಮಾಲತಿ ಸುಧೀರ್ ಭಾವುಕರಾಗಿದ್ದಾರೆ. ಇಷ್ಟು ದಿನ ಕಾದಿದ್ದಕ್ಕೂ ದೇವರು ಒಳ್ಳೆಯ ಸೊಸೆಯನ್ನು ಕೊಟ್ಟಿದ್ದಾನೆ ಅಂತ ಆನಂದ ಭಾಷ್ಪ ಸುರಿಸಿದ್ದಾರೆ.

Leave a Comment